PARISH PRIEST MESSAGE
PARISH PRIEST MESSAGE
“ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ”
ಶುಭವಾರ್ತೆಯ ಈ ವಾಕ್ಯವು ನಮ್ಮೆಲ್ಲರ ಸ್ತುತಿಸ್ತೋತ್ರವಾಗಿದೆ. ಸಂತ ಜೋಕಿಮರ ಮೂಲಕ ಕಡಬ ಧರ್ಮಕೇಂದ್ರದಲ್ಲಿ ಕಳೆದ ನೂರು ವರುಷಗಳಿಂದ ನಡೆದಿರುವಂತಹ ಪವಾಡಗಳಿಗೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿಯಾಗಿದೆ. ಈ ವರುಷದ ಶತಮಾನೋತ್ಸವ ಸಂಭ್ರಮ ಆಚರಣೆಯು ನಮಗೆ ದೇವರು ಕೊಟ್ಟಿರುವ ನಮ್ಮ ಭಾಗ್ಯವಾಗಿದೆ.
1924ರಲ್ಲಿ ಈ ಪುಟ್ಟ ಪರಿಸರದಲ್ಲಿ ಆರಂಭಗೊoಡoಹ ಆಧ್ಯಾತ್ಮಿಕ ಸೇವೆಯು ಇಂದು ವಿವಿಧ ರೀತಿಯ ಸೇವೆಯನ್ನು ನೀಡಲು ಸಾಧ್ಯವಾಗಿದೆ.
ಇಂದು ಕಡಬ ಪರಿಸರವು ಕಡಬ ತಾಲೂಕಾಗಿ ಪರಿವರ್ತಿತಗೊಂಡ ಪ್ರದೇಶದ ಮಧ್ಯಭಾಗದಲ್ಲಿ ಕಂಗೊಳಿಸುವ ವಿಶಾಲವಾದ ಪ್ರದೇಶದಲ್ಲಿ ಸೈಂಟ್ ಜೋಕಿಮ್ ಚರ್ಚ್ ಹಾಗೂ ಒಳಪಟ್ಟ ವಿದ್ಯಾಸಂಸ್ಥೆಗಳು, ವಾಣಿಜ್ಯ ಸಂಕೀರ್ಣವು ಹಾಗೂ ಸಭಾಭವನ ಹಾಗೂ ವಿಶಾಲವಾದ ಮೈದಾನವು ಎಲ್ಲರನ್ನೂ ಆಕರ್ಷಿಸುತ್ತಿದೆ.
ಕಳೆದ ನೂರು ವರ್ಷಗಳಿಂದ ಈ ಧರ್ಮಕೇಂದ್ರ ವಿಶಿಷ್ಟ ಸೇವೆಯನ್ನು ನೀಡುತ್ತಾ ಬಂದಿದೆ. ಬಡ ಮಕ್ಕಳಿಗಾಗಿ ಪ್ರಾಥಮಿಕ ಶಾಲೆಯು ಹಾಗೂ ದೂರದ ಊರಿನಿಂದ ಬರುವವರಿಗೆ ವಾಸ್ತವ್ಯಕ್ಕಾಗಿ ಬೋರ್ಡಿಂಗ್ ಸ್ಕೂಲ್. ಇಲ್ಲಿ ಕ್ರಮೇಣ ಹೈಸ್ಕೂಲ್ ಹಾಗೂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ, ಇಂಗ್ಲಿಷ್ ಮಾಧ್ಯಮದಲ್ಲಿ ಸೈಂಟ್ ಆನ್ಸ್ ಸ್ಕೂಲ್ನಲ್ಲಿ ಹೈಸ್ಕೂಲ್ ತನಕ ವಿದ್ಯಾಭ್ಯಾಸ ನೀಡುತ್ತಾ ಬಂದಿರುತ್ತದೆ. ಇದಕ್ಕಾಗಿ ಜಾತಿ ಧರ್ಮ ಲೆಕ್ಕಿಸದೆ ಬಂದಿರುವ ಎಲ್ಲಾ ಧರ್ಮದವರು ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ. ಧರ್ಮಗುರುಗಳ ಹಾಗೂ ಧರ್ಮಭಗಿನಿಯರ ಹಾಗೂ ಧರ್ಮಕೇಂದ್ರದ ಹಲವಾರು ಮುಖಂಡರುಗಳು ಹಾಗೂ ಸದಸ್ಯರ ಶ್ರಮದಿಂದ ಎಲ್ಲಾ ಕ್ಷೇತ್ರಗಳಲ್ಲಿ ಆಕರ್ಷಿತವಾಗಿದೆ.
ಧರ್ಮಕೇಂದ್ರದ ಪಾಲಕರಾದ ಸಂತ ಜೋಕಿಮರ ಆಶ್ರಯದಲ್ಲಿ ಅಭಿವೃದ್ಧಿಗಳ ಕೆಲಸಗಳು ಸಾಕಷ್ಟು ಆಗಿದೆ. ಕೊಂಕಣಿ, ಕನ್ನಡ, ಮಲೆಯಾಳಂ, ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಗಳ ಕೇಂದ್ರವಾಗಿದೆ.
ಹಲವು ಧರ್ಮಪ್ರಾಂತ್ಯಗಳ ಧರ್ಮ ಮುಖಂಡರನ್ನು ಹಾಗೂ ಜನರನ್ನು ಒಂದುಗೂಡಿಸುವ ಪ್ರದೇಶವೇ ಸಂತ ಜೋಕಿಮರ ಈ ದೇವಾಲಯ. ಯಾಕೆಂದರೆ ಕಳೆದ 42 ವರ್ಷಗಳಿಂದ ವಂದನೀಯ ಫಾದರ್ ಝಕಾರಿಯಾಸ್ ಮುಂದಾಳತ್ವದಲ್ಲಿ ನಡೆಯುವ ಸಂಯುಕ್ತ ಕ್ರಿಸ್ಮಸ್ ಆಚರಣೆಯು ಪ್ರಭು ಕ್ರಿಸ್ತರ ಶಾಂತಿಯ ಹಾಗೂ ಪ್ರೀತಿಯ ಮೌಲ್ಯಗಳನ್ನು ಜನರಲ್ಲಿ ಹರಡಲು ಅವಕಾಶ ಮಾಡಿಕೊಟ್ಟಿದೆ.
ಬೆಳ್ತಂಗಡಿ, ಪುತ್ತೂರು, ಕೊಟ್ಟಯಾಂ, ಬ್ರಹ್ಮಾವರ ಹಾಗೂ ಮಂಗಳೂರು ಧರ್ಮಪ್ರಾಂತ್ಯ ಯಾಜಕರು ಹಾಗೂ ವಿವಿಧ ಗುಂಪುಗಳ ಧಾರ್ಮಿಕ ಭಗಿನಿಯರು ಕಡಬದ ಸುತ್ತಮುತ್ತಲಿನ ದೇವಾಲಯದಲ್ಲಿ ಹಾಗೂ ಕಾನ್ವೆಂಟ್ನಲ್ಲಿ ಸೇವೆ ನೀಡುತ್ತಾ ಇರುವುದು ಹಾಗೂ ಕ್ರಿಸ್ಮಸ್ ಸಂಭ್ರಮ ವಿವಿಧ ಧಾರ್ಮಿಕ ಮುಖಂಡರುಗಳ ಮುಂದಾಳತ್ವದಲ್ಲಿ ಆಚರಿಸುವುದು ನಿಜವಾಗಿಯೂ ಏಕತೆಗೆ ಕಾರಣವಾಗಿದೆ. ಕೀರ್ತನೆ 133:1
ಸಹೋದ್ಯೋಗಿಗಳು ಐಕ್ಯತೆಯಲ್ಲಿ ಹೊಂದಿದ್ದರು . ಎಷ್ಟು ಮನೋಹರವು ಪವಿತ್ರ ಬೈಬಲ್ನ ಕೀರ್ತನೆಗಾರರ ವಾಕ್ಯವು ಖಂಡಿತವಾಗಿಯೂ ಸತ್ಯವಾಗಿದೆ. ಎಲ್ಲಾ ಮತ ಪಂಗಡದ ಜನರೂ ಒಟ್ಟಾಗಿ ಪ್ರಭುವಿನ ಶಾಂತಿಯ ಸಂದೇಶ ಸಾರುವಾಗ ಅದೆಷ್ಟೋ ಸಂತೋಷವನ್ನು ಕಂಡುಕೊಳ್ಳುತ್ತಾರೆ. ನಮ್ಮ ಈ ಶತಮಾನೋತ್ಸವದ ಸಂಭ್ರಮದಲ್ಲಿ ಎಲ್ಲಾ ಧರ್ಮಕೇಂದ್ರದ ಮುಖಂಡರು ಹಾಗೂ ಜನರು ಒಟ್ಟಿಗೆ ಸೇರಿ ಆಚರಿಸಲು ನಮಗೂ ಸಂಭ್ರಮವನ್ನು ತಂದಿದೆ.
ಶತಮಾನೋತ್ಸವದ ಸವಿನೆನಪಿಗಾಗಿ ಧರ್ಮಕೇಂದ್ರದ ಮುಖಂಡರ ಹಾಗೂ ಜನರ ಮುಂದಾಳತ್ವದಲ್ಲಿ ಹೊರತರುವ ಸಂತ ಜೋಕಿಮರ ನೆರಳಲ್ಲಿ ಜಾಲತಾಣವು ಮುಂದಿನ ಪೀಳಿಗೆಗೆ ನೆನಪಿನ ಅಸ್ತçವಾಗಲೆಂದು ನಮ್ಮ ಆಶಯ.
ಈ ದೇವಾಲಯದ ಅಭಿವೃದ್ಧಿಗೆ ಹಗಲಿರುಳು ದುಡಿದ ಎಲ್ಲಾ ಮುಖಂಡರಿಗೆ ಹಾಗೂ ಜನರಿಗೆ ಧನ್ಯವಾದವನ್ನು ಸಮರ್ಪಿಸುತ್ತೇವೆ. ದೇವರ ಆಶೀರ್ವಾದವನ್ನು ಬೇಡಿಕೊಳ್ಳುತ್ತೇವೆ.